ಓ ರಾಜಹಂಸರಿರ ಏಳಿ ಏಳಿ

ಓ ಏಳಿ ಮಕ್ಕಳಿರಾ ಚಲುವಾತ್ಮ ಕಂದರಿರಾ
ಅಮೃತದ ವರಗಳಿಗಿ ಬಂತು ಏಳಿ
ಶುಕ್ರತಾರೆಯ ತುಂಬಿ ಅಮೃತವ ತಂದಿರುವೆ
ಓ ರಾಜಹಂಸರಿರ ಏಳಿ ಏಳಿ

ರಾಜಹಂಸರು ನೀವು ರಾಜವಂಸರು ನೀವು
ಜ್ಞಾನಮುರಳಿಯ ಕೊಳಲು ಕೇಳಬನ್ನಿ
ಬಿಳಿಯಾನೆ ಬಿಳಿಹುಲಿಯು ಬಿಳಿಸಿಂಹ ನೀವಯ್ಯ
ನವಯುಗದ ರಂಗೋಲಿ ಬರೆಯಬನ್ನಿ

ಶಾಂತಿಧಾಮವ ಬಿಟ್ಟು ನಿಮ್ಮ ಧಾಮಕೆ ಬಂದೆ
ನಿಮ್ಮಾತ್ಮ ಬಾಗಿಲವ ತೆರೆಯ ಬಂದ
ಜ್ಯೋತಿ ಸಾಗರ ತಂದೆ ಪ್ರೀತಿ ಸಾಗರ ತಂದೆ
ಜ್ಞಾನಸಾಗರ ನಿಮಗೆ ಸುರಿಯು ಬಂದೆ

ಕಣ್ಣು ಮುಚ್ಚಲು ನರಕ ಕಣ್ಣು ಬಿಚ್ಚಲು ಸ್ವರ್ಗ
ನವಯುಗದ ಕಹಳೆಯನು ಊದಲೇಳಿ
ಕಲಿಯುಗದ ಕಲ್ಲುಗಳ ಕಲಹದಾ ಮುಳ್ಳುಗಳ
ಮಲ್ಲಿಗೆಯ ಹೂಗೊಳಿಸಿ ನಗಿಸಲೇಳಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಕುನಿ
Next post ನೈತಿಕತೆ

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

cheap jordans|wholesale air max|wholesale jordans|wholesale jewelry|wholesale jerseys